Translate

Friday 12 July 2013

ಅಭಿಪ್ರಾಯ ಎನ್ನುವದು ಅರ್ಥಹೀನ-ಹೆರ್ಮನ್ ಹೆಸ್‍(( ((Herman Hesse)

Hermann Hesse
ಹೆರ್ಮನ್ ಹೆಸ್‍(Herman Hesse) `ಸಿದ್ದಾರ್ಥ’(Siddharth) ತುಂಬಲೂ ಆತನ ಅನುಭವದ ರಸಾತಳದಿಂದ ಬಂದ ಅನೇಕ ಹೇಳಿಕೆಗಳಿವೆ. ಇಡೀ ಗ್ರಂಥವನ್ನು ಕಂಠಪಾಠ ಮಾಡಬೇಕು ಎಂದು ಓದುಗರಿಗೆ ಅನ್ನಿಸುವಂಥ ಜೀವನ ಪ್ರೀತಿಯನ್ನು ಕಾದಂಬರಿಯಲ್ಲಿ ಆತ ತುಂಬಿದ್ದಾನೆ. ಸಿದ್ಧಾರ್ಥ ಬಂದ ಹೊಸದರಲ್ಲಿ ಪೂರ್ವ ಪಶ್ಚಿಮಗಳ ಚಿಂತಕರಿಬ್ಬರೂ ಹೆಸ್ ವೈಚಾರಿಕತೆಗೆ, ಭಾವ ಸೌಂದರ್ಯಕ್ಕೆ ಮುಗ್ಧರಾದರು, ಪೂರ್ವದ ತೀವ್ರ ಆಕರ್ಷಣೆಗೆ ಒಳಗಾಗಿದ್ದ ಹೆಸ್ ಎಲ್ಲಿಯೂ ಮೈಮರೆಯುವುದಿಲ್ಲ. ಯಾವುದೇ ಗೊಡ್ಡು ಸಿದ್ದಾಂತಗಳಿಗೆ ತಲೆದೂಗುವುದಿಲ್ಲ. ಮನುಷ್ಯ ನಿರ್ಮಿತ ಯುದ್ದದಂತೆ ಹೇಯ ಕ್ರಿಯೆಯಿಂದ ಭೀತಗೊಂಡಿದ್ದ ಹೆಸ್ ಯುದ್ದವನ್ನು ಹಾಗೂ ಅದರ ಭೀತಿಯನ್ನು ಮನುಷ್ಯನ ಬಾಹ್ಯ ಹಾಗೂ ಆಂತರಿಕ ಜಗತ್ತುಗಳೆರಡರಿಂದಲೂ ಬುಡ ಸಮೇತ ನಿರ್ಮೂಲಗೊಳಿಸಲು ಯತ್ನಿಸುತ್ತಾನೆ. ಹೆಸ್ ಪಾಲಿಗೆ ಬದುಕು ಎನ್ನುವುದು ಶರಣಾಗತಿಯಲ್ಲ. ಅಂತೆಯೆ ಹರ್ಮನ್ ಹೆಸ್ ಸಿದ್ದಾರ್ಥ ಮತ್ತೆ ಮತ್ತೆ ಹೇಳುತ್ತಾನೆ. “I will no longer try to escape from Siddhartha. I will no longer devote my thoughts to atman and the sarrows of the world. I will no longer mutilate and destroy myself in order to find a secret behinf the ruins. I will no longer study Yoga-Veda, Atharva-Veda or asceticism, or any other teachings. I will learn from myself, be my own pupil, I will learn from myself the secrete of Siddhartha”.

`Siddhartha' by hermann Hesse
`ಸಿದ್ದಾರ್ಥಕಾದಂಬರಿ ಮುಗಿದರೂ ಪೂರ್ವ-ಪಶ್ಚಿಮಗಳ ಆಧ್ಯಾತ್ಮಿಕ ವಿಚಾರಗಳ ಮಂಥನದಿಂದ ಹೆಸ್ ಮೂಲಕ ಹೊರಬಂದ ವಿಚಾರಗಳನ್ನು ರೀತಿ ಸಂಗ್ರಹಿಸಬಹುದಾಗಿದೆ
1.            ಧ್ಯಾನ ಎಂಬುವುದು ತಾತ್ಕಾಲಿಕ ಪಲಾಯನದ ದಾರಿ, ಮತ್ತೇರಿಸಿ ಮೈಮರೆಸುವ ಶೆರೆಗೂ ಧ್ಯಾನಕ್ಕೂ ದೊಡ್ಡ ವ್ಯತ್ಯಾಸವಿಲ್ಲ.
2.            ಅಭಿಪ್ರಾಯ ಎನ್ನುವದು ಅರ್ಥಹೀನ. ಅದು ರುಚಿಸಿಬಹುದು ಅಥವಾ ಅರುಚಿಯಾಗಿರಲೂಬಹುದು. ಯಾರೂ ಅದನ್ನು ಒಪ್ಪಿಕೊಳ್ಳಬಹುದು ಇಲ್ಲಾ ಧಿಕ್ಕರಿಸಬಹುದು. ಅದು ಜಾಣತನದ ಮಾತಾಗಿರಬಹುದು ಅಥವಾ ಮೂರ್ಖತನದ ಅಭಿವ್ಯಕ್ತಿಯಾಗಿರಬಹುದು. ಜ್ಞಾನದ ಹಸಿವಿನಿಂದ ಬಳಲುತ್ತಿರುವವರಿಗೆ ಜಗತ್ತನ್ನು ವಿವರಿಸುವುದು ಅಭಿಪ್ರಾಯದ ಉದ್ದೇಶವಲ್ಲ. ಅದರ ಗುರಿ ತೀರ ಭಿನ್ನ, ಮನುಷ್ಯನನ್ನು ನರಳುವಿಕೆಯಿಂದ ಮುಕ್ತನನ್ನಾಗಿಸುವುದು.
3.            ಕಲಿಕೆಯಿಂದ ಏನನ್ನೂ ಕಲಿಯಲಾಗುವುದಿಲ್ಲ. ಒಂದು ಅನುಭವಕ್ಕೆ ರೂಪಕೊಡಬಹುದು, ಆದರೆ   ಅನುಭವವನ್ನು ಕಲಿಸಲಾಗದು ಅಥವಾ ಮೂಲಕ ನಮ್ಮದಾಗಿಸಿಕೊಳ್ಳಲಾಗದು.
4.            ಪ್ರೀತಿಯನ್ನು ಕೇಳಬಹುದು ಕೊಡಬಹುದು, ನಮ್ಮ ಸುತ್ತಲೂ ಬದುಕಿರುವ ಎಲ್ಲರಲ್ಲೂ ಅದರ ಸ್ವರೂಪವನ್ನು ನೋಡಬಹುದು ಆದರೆ ಒಬ್ಬರ ಕಣ್ಣು ತಪ್ಪಿಸಿ ಅದನ್ನು ಕದಿಯಲಾಗದು.
5.            ಬರೆಯುವುದು ಉತ್ತಮ, ಚಿಂತಿಸುವುದು ಅತ್ಯುತ್ತಮ: ಜಾಣ್ಮೆ ಉತ್ತಮ, ಸಹನೆ ಅತ್ಯುತ್ತಮ.
6.            ಪ್ರೀತಿಯಲ್ಲಿರುವ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಪ್ರಶಂಸಿಸದ ಹೊರತು ಒಬ್ಬರಿಂದೊಬ್ಬರು ಅಗಲಬಾರದು.
7.            ಸಭ್ಯತೆ, ಅನಾಗರಿಕತೆಗಿಂತಲೂ; ನೀರು ಕಲ್ಲಿಗಿಂತಲೂ ಹಾಗೂ ಪ್ರೀತಿ ಅಧಿಕಾರಕ್ಕಿಂತಲೂ ಶಕ್ತಿಶಾಲಿ
8.            ಜ್ಞಾನವನ್ನು ಹೇಳಬಹುದು, ಹಂಚಿಕೊಳ್ಳಬಹುದು, ತಿಳುವಳಿಕೆ ಅಥವಾ ಅನುಭವವನ್ನು ಹಂಚಿಕೊಳ್ಳಲಾಗದು, ಎಂಥ ಜ್ಞಾನಿಯೂ ಅದನ್ನು ಹಂಚಿಕೊಳ್ಳಲು ಸಿದ್ದನಾದಾಗ ಮೂರ್ಖನೆನ್ನೆಸಿಕೊಳ್ಳುತ್ತಾನೆ.






ಹೆಚ್ಚಿನ ಓದಿಗಾಗಿ `ಶಬ್ದ ಸೂತಕದಿಂದ’, ಕಣ್ವ ಪ್ರಕಾಶನ, ಬೆಂಗಳೂರು. ಮೊ-೯೮೪೫೦೫೨೪೮೧

2 comments:

  1. The article is very good and quite analyitical. Please read 'Stepphenwolf' by Hesse if you can get it. It is even better than Siddharth. I am glad that you are doing this good work in a remote place like Belur. Thank you.
    H.S. Raghavendra Rao

    ReplyDelete
  2. Respected Sir, Thank you for your encouraging reaction and suggestions regarding further reading in literature by Herman Hesse. Belur is geographically remote, but culturally it is known all over the world. Please visit two more blogs.-rgmathapati.blogspot.com and ragamwritings.blogspot.com. I expect you to read my `Gandhi:Anthima Dinagalu', and `Gandhi: Mugiyada Adhyaya'. Pub by Kanva Prakashana, Bangalore. Available at Sapna and all major Shops.

    ReplyDelete